Friday, August 19, 2016

ಸಜ್ಜನ ಗಡ : ನಿಸರ್ಗ ಸಂಪತ್ತಿನ ದೈವೀ ಕ್ಷೇತ್ರ

ಸಜ್ಜನಗಡ : ನಿಸರ್ಗ ಸಂಪತ್ತಿನ ದೈವೀ ಕ್ಷೇತ್ರ

सज्जनगड : निसर्ग सम्पत्ती से बरा हुअ दैवी क्षेत्र 
Sajjanaghada : Sacred place with grandeur of nature.

------------------------------------------------------------

"ಗುರು" ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. "ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ" ’ಗು’ ಎಂದರೆ ’ಅಂಧಕಾರ’ ’ರು’ ಎಂದರೆ ’ನಾಶಪಡಿಸುವವನು’ ಎಂದರ್ಥವಿದೆ. ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ. ಇಂತಹ ಗುರುವನ್ನು ವರ್ಣನೆ ಮಾಡಲು ಶ್ರುತಿಗೆ ಕೂಡಾ ಸಾಧ್ಯವಾಗದೇ "ನೇತಿ ನೇತಿ" ಎಂದು ನಿಲ್ಲಿಸುತ್ತಾಳೆ. ಅಂದರೆ ಇದಲ್ಲ, ಇದಲ್ಲ ಎಂದರ್ಥ. ಶಬ್ಧಗಳಲ್ಲಿ ವರ್ಣಿಸಲಾಗದಷ್ಟು ಮಹತ್ತನ್ನು ಗುರುವು ಹೊಂದಿದ್ದಾನೆ ಎಂಬುದು ತಾತ್ಪರ್ಯ. ಹರ ಮುನಿಯಲು ಗುರು ಕಾಯ್ವನು ಗುರು ಮುನಿಯಲು ಹರ ಕಾಯನು ಎಂದು, ಗುರುವಿನ ಮಹತ್ವವನ್ನು ಅನಾದಿಕಾಲದಲ್ಲಿಯೇ ಹಿರಿಯರು ಕೊಂಡಾಡಿದ್ದಾರೆ.
'गुरु' इस शब्द तो 'गु ' और 'रु ' ये दो अक्षर से बनायाहुअ हैं । " गुकारोंदकारत्वात रुकारो तन्निवारकः " । ' गु ' का मतलब है अंधकार और ' रु ' का मतलब होताहै नाश करनेवाल । ' गुरु ' का अर्थ है आत्मांधकार को आद्यात्मिक उजाला से विनाश करनेवाली व्यक्ति । इस गुरु का महत्व वर्णन करना शृतीमाता को बी असम्भव हुआ । वो बी ' नेति नेति ' करके रुखगयी । नेति नेति का मतलब है ऐ नही ऐ नही । मतलब है गुरु इतना महत्वापूर्ण है कि हम उसका पूरा वर्णन बी नहीं करसक्ते हैं । अगर हर यानी महादेव क्रोद हुआ तो हम्को गुरु बचा सक्ते है । गुरु ही क्रोधित हुवा तो कोइ बचा नही सक्ते । इस तरह गुरू का महिमा को हमारी पूर्वज बहुत पेहले प्रशम्सा कर्चुके है ।
ಇಂತಹ ಮಹಾನ್ ಗುರುಗಳಲ್ಲಿ ಕ್ರಿ.ಶ. ೧೫೯೮ ರಲ್ಲಿ ಜನಿಸಿದ ಸ್ವಾಮಿ ಸಮರ್ಥ ರಾಮದಾಸರು ಮೇರುಪರ್ವತದೋಪಾಧಿಯಲ್ಲಿ ನಿಲ್ಲುತ್ತಾರೆ. ಮಹಾಮಹಿಮ ಆಂಜನೇಯನ ಅವತಾರವೇ ಶ್ರೀ ಸಮರ್ಥ ರಾಮದಾಸರಾಗಿದ್ದಾರೆ. ಹದಿನಾರನೆಯ ಶತಮಾನದಲ್ಲಿ , ಸಜ್ಜನರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಇವರ ಅವತಾರವಾಯಿತು. ಧರ್ಮ ರಕ್ಷಣೆಗಾಗಿ ಅವತರಿಸಿದ ಇವರು , ಪಟ್ಟಶಿಷ್ಯ ಶಿವಾಜಿ ಮಹಾರಾಜನಿಗೆ ಸೂಕ್ತ ಮಾರ್ಗದರ್ಶನ ಮಾಡಿ , ಆ ಮೂಲಕ ಧರ್ಮವುಳಿಯಲು ಕಾರಣರಾದವರು. ಇವರ ಶಿಷ್ಯಂದಿರು ಕೂಡಾ ತಮ್ಮತಮ್ಮ ವಿಭಾಗಗಳಲ್ಲಿ ಅದ್ವಿತೀಯರಾಗಿದ್ದಾರೆ. ಅದು ಶಿವಾಜಿ ಮಹಾರಾಜನೇ ಇರಲಿ, ಕಲ್ಯಾಣಸ್ವಾಮಿಯೇ ಇರಲಿ ಅಥವಾ ಪರಮಗುರು ಶ್ರೀಧರಸ್ವಾಮಿಗಳೇ ಇರಲಿ , ಇವರು ತಮ್ಮ ಸಾಧನೆಯಿಂದ ಗುರುಗಳ ನಾಮವನ್ನು ಸಹ ಉಜ್ವಲಗೊಳಿಸಿದ್ದಾರೆ. इस तरह का महान गुरुओं मैं सन्‌ १५९८ मैं जन्म किया स्वामी समर्थ रामदास जी ने मेरुपर्वत के तरह कडा होता हैं । महामहिम आंजनेय जी का पुनरावतार ही स्वमी रामदास जी है । सोलहवी शतमान मैं साधु सज्जन लोग बहुत मुश्किल मैं रेहने का वक्त मैं इस रामदास जी का अवतार हुअ । धर्मरक्षण केलिए अवतार कर्के उन्होने उसका प्रीय शिष्य छ्त्रपती शिवाजी महाराज को सूक्त मर्गदर्शन करके उनसे धर्मका स्थापन होनेका कारण बंगया । रामदास जी का शिष्योंने बी उंका विबागो मैं अद्वितीय बनगया । चाहे वो कल्याणस्वामि हो या शिवाजी महाराज हो या परमगुरु श्रीधर जी हो इन सब लोगों ने उसका साधना से अपने गुरु रामदास जी का नाम को बी उज्वल किया ।
ಇತ್ತೀಚೆಗೆ ಸಮರ್ಥ ರಾಮದಾಸರು ಬ್ರಹ್ಮೀಭೂತರಾಗಿ, ಸಮಾಧಿಸ್ಥಿತಿಯಲ್ಲಿ ನೆಲೆಸಿರುವ ಕ್ಷೇತ್ರ ಸಜ್ಜನಗಡಕ್ಕೆ ನಾವು ಗೆಳೆಯರು ಹೋಗಿದ್ದೆವು. ಮಹಾರಾಷ್ಟ್ರದ ಸತಾರ ಜಿಲ್ಲಾ ಕೇಂದ್ರದಿಂದ ಕೇವಲ ಹದಿನೆಂಟು ಕಿಲೊಮೀಟರ್ ದೂರದಲ್ಲಿ, ಪರಳಿಯ ಬಳಿ , ಅಂಬರಚುಂಬಿತವಾಗಿದೆ ಈ ಮಹಾಗಿರಿ. ಭೂಗರ್ಭಶಾಸ್ತ್ರದಲ್ಲಿ ಟೇಬಲ್ ಟಾಪ್ ಮೌಂಟನ್ ಎಂದು ಈ ಪರ್ವತಗಳನ್ನು ಹೆಸರಿಸಲಾಗಿದೆ. ಇಂತಹ ಹಲವು ಗಿರಿಗಳ ಸಮೂಹವೇ ಸುತ್ತಮುತ್ತಲೂ ಇದೆ. ಭೂಮಿಯ ಕೆಲವು ಭಾಗಗಳಲ್ಲಿ ಪರ್ವತ ರಚನೆಯಾಗಿ ಆ ಪರ್ವತದ ತುದಿಭಾಗ ಮಾತ್ರ ಮೇಜಿನಂತೆ ಎತ್ತರವಾಗಿ, ಮೇಲ್ಬಾಗ ಸಮತಟ್ಟಾಗಿರುವಂತಹ, ರಚನೆಯೇ ಟೇಬಲ್ ಟಾಪ್ ಮೌಂಟನ್. ಸಮತಟ್ಟಾದ ಭಾಗ ಮಾತ್ರ ಎತ್ತರವಾಗಿ, ಉಳಿದ ಇಳಿಜಾರು ಪರ್ವತಭಾಗ ತಗ್ಗಿನಲ್ಲಿಯೇ ಇರುವ ಕಾರಣ ಗಡದ ಸುತ್ತಲೂ ಎತ್ತರದ ಗೋಡೆ ಕಟ್ಟಿದಂತೆ ಕಾಣುವ ಇದು , ಅದೇ ಕಾರಣಕ್ಕೆ ಅಭೇದ್ಯವಾಗಿಯೂ ಇದೆ. हाल ही मैं हम मित्रों ने समर्थ रामदास जी ब्रह्मीभूत होकर समाधी अवस्था मैं रेहनेवाली सज्जंगड का प्रवास किया था । महारष्ट्र राज्य का सतारा जिल्ला केंद्र से करीबन अट्टरह किलोमीटर दूरी मैं परळी के पास अंतरिक्ष छूनेवाला इस महागिरि स्थित है । भूविज्नान शास्त्र के तहत इस तरह का पहाड को टेबल टाप मौंटन केहलाथे हैं । भूमिका कुच प्रदेश मैं पर्वत का रचना होकर, उस पर्वत का ऊंची भाग मैं चपटा हो जानेवाली रचना को टेबल टाप मौंटन केहलाथे है । उस मेज़ की तरह का रचना की किनारे से आगेका खंड थो पूरा नीछे जातेहै । इस के कारण से ऐ एक प्रकृतिक किला जैसा लगते हैं ।
ಇಂತಹ ಒಂದು ರಚನೆಯೇ ಸಜ್ಜನಗಡ. ಯವನನಾಶಕ ಶಿವಾಜಿ ಮಹಾರಾಜನ ಮೆಚ್ಚಿನ ತಾಣವಾದ ಇದನ್ನು , ಅವನು ತನ್ನ ಗುರುಗಳಾದ ಸಮರ್ಥ ರಾಮದಾಸ ಸ್ವಾಮಿಗಳಿಗೆ ಅರ್ಪಿಸಿದ್ದಾನೆ. ತಪೋಭೂಮಿಯಾದ ಇದು ಸಮರ್ಥರು ದೇಹದಿಂದಿರುವವರೆಗೂ ಅವರ ಕರ್ಮಭೂಮಿಯಾಗಿದ್ದು , ಅವರ ಮಹಾಸಮಾಧಿಯ ನಂತರ ಲೋಕಕ್ಕೆಲ್ಲ ಒಳಿತನ್ನುಂಟುಮಾಡುವ ಕಲ್ಯಾಣ ಭೂಮಿಯಾಗಿದೆ. सज्जनगड थो इस तरह का ऐक रचना है ।ऐ तो यवननाशक शिवाजि महाराज का बहुप्रिय जगह था । इस गडको उसने उसका गुरू समर्थ रामदास जी को समर्पित किया । जब तक समर्थ रामदास जी बौतिक काय मैं थे तब तक ये उसका कर्मभूमि था । उसका मनिर्याण के बद सारी सम्सार को हित कर्नेवाली कल्याण भूमि बनगया ।

ಸಮರ್ಥರು ಆರ್ಥರಾಗಿ ತಮ್ಮ ಬಳಿ ಬಂದು, ಭಕ್ತಿಯಿಂದ ಪ್ರಾರ್ಥನೆ ಮಾಡಿದಂತಹ ಜನರೆಲ್ಲರಿಗೂ ಅವರ ಮನೋಕಾಮನೆ ಪೂರ್ತಿಯಾಗುವಂತೆ ವರ ನೀಡಬಲ್ಲಂತ ಮಹಾಮಹಿಮರು ಎಂಬುದು ಲೋಕವಿದಿತ. ಅವರ ಬಾಲ್ಯದಿಂದಲೂ ಅವರ ಈ ಗುಣವನ್ನು ನೋಡಿದ ಭಕ್ತರು ಅವರನ್ನು ಕೊಂಡಾಡುತ್ತಾರೆ. ಭಗವಂತನ ಹಾಗೂ ಮಹಾತ್ಮರ ಅನುಗ್ರಹಕ್ಕೆ, ದೇಹದಂಡನೆ, ಪ್ರಾರ್ಥನೆ, ಪ್ರಯತ್ನ, ಸಾಧನೆ , ಸಿದ್ದಿ , ಪೂರ್ವತಯಾರಿ, ದರ್ಶನ ಇತ್ಯಾದಿಗಳು ಸಹಕಾರಿ. ಸಜ್ಜನಗಡಗ ಮೆಟ್ಟಿಲುಗಳನ್ನು ಹತ್ತುವಾಗ ಇವುಗಳೆಲ್ಲವೂ ಆದಂತೆನಿಸುತ್ತದೆ. ಎತ್ತರೆತ್ತರಕ್ಕೇರುತ್ತಾ ನಮ್ಮ ಮನದ ಚಿಂತೆ, ದುಗುಡ ದುಮ್ಮಾನಗಳು, ಕೆಟ್ಟ ಯೋಚನೆಗಳು, ಎಲ್ಲವೂ ಹಗುರಾಗುತ್ತಾ ಕಳೆಯುತ್ತಿರುವ ಭಾವನೆ ನಮ್ಮನ್ನಾವರಿಸುತ್ತದೆ. आर्थ हूकर उसके पास आनेवाले सबी लोगोंको बलाइ करने वाला और उन लोगोंका मनोकामना पूरी होनेकेलिऐ वर देनेवाला महामहिम है समर्थ रामदास जी इस बात तो सबी लोगोंको मालूम है । स्वामीजीका बाल्य काल से ही इस गुण उन्मे थे । भगवान और महात्मा का अनुग्र्ह पानेकेलिए देहद्ण्डना, प्रार्थना, प्रयत्न , साधना, सिद्दि, पूर्वतय्यरी , दर्शन इन सारी छीजे सहकारी होते है । हमे गडका सीढीयोंको छढ्ते छढते ये सारी बाते पूरा होने जैसे लग्ता है | ऊपर जाते जाते हमारी मनका चिंता, दुगुड, बुरी योचानाएं जाकर , हम्मारी भोज कम होते जैसे अनुभव होते हें |
ಮೆಟ್ಟಿಲುಗಳನ್ನು ಹತ್ತಿ ಬರುತ್ತಾ, ಗಡದ ಮಹಾದ್ವಾರದ ಬಳಿ, ಸಂಪೂರ್ಣ ಗಡದ ನಕ್ಷೆಯನ್ನು ಹಾಕಿರುವುದು ಕಂಡು ಬರುತ್ತದೆ.ಶಿವಾಜಿಯ ಕಾಲದಲ್ಲಿ , ಮಹಾದ್ವಾರವನ್ನು ಹಾಕಿದ ನಂತರ ಯಾರಿಗೂ ಗಡದ ಒಳಗೆ ಪ್ರವೇಶವಿರಲಿಲ್ಲ. ಆ ದ್ವಾರವನ್ನುಳಿದು ಬೇರಾವ ದಾರಿಯೂ ಗಡಕ್ಕಿಲ್ಲ. ಹಾಗೇ ಮೇಲೆ ಬಂದರೆ ಎಡಬಾಗದಲ್ಲಿ ಸಮರ್ಥ ಸೇವಾ ಮಂಡಳದ ಕಾರ್ಯಾಲಯ ಸಿಗುತ್ತದೆ. ಅದರ ಪಕ್ಕದಲ್ಲಿಯೇ ಶ್ರೀಧರ ಕುಟಿ ಇದೆ. ನೇರವಾಗಿ ಮುಂದೆ ಸಾಗಿದರೆ ಶ್ರೀ ಸಮರ್ಥ ರಾಮದಾಸ ಮಠ ಇದೆ. ಬಲಪಕ್ಕದಲ್ಲಿ ಸಮರ್ಥರ ಸಮಾಧಿ ಮಂದಿರ, ಗುಹೆ ಇದೆ. ಮಠದಲ್ಲಿ , ಸಮರ್ಥರು ಬಳಸುತ್ತಿದ್ದ ವಸ್ತುಗಳ ಸಂಗ್ರಹಾಲಯವಿದೆ. ಅಲ್ಲಿ ಸಮರ್ಥರ ಹಾಸಿಗೆ, ಅವರ ಯೋಗದಂಡಗಳು, ಕಲ್ಯಾಣಸ್ವಾಮಿಯವರು ಗಡದ ಕೆಳಬಾಗದಿಂದ ನೀರು ತರುತ್ತಿದ್ದ ಹಂಡೆಯ ಗಾತ್ರದ ಕೊಡಗಳು, ಅಷ್ಟಲ್ಲದೇ ಸಮರ್ಥರಿಗೆ ಆಂಜನೇಯನಿಂದ ಪ್ರಸಾದಿತವಾದ ಶ್ರೀರಾಮದೇವರು ಉಟ್ಟ ವಲ್ಕಲಗಳನ್ನೂ ಕಾಣಬಹುದಾಗಿದೆ. सीधियोंको छढकर आते वक्त , गडका महाद्वार के पास गडका पूरी नक्षा हम देक स्क्ते है । शिवाजी महाराज के काल मैं दर्वाजा बंद करनेके बाद किसीको अंदर आनेकेलिए इझाजत नही था । उस महाद्वर को चोडकर कोइ दूसरी दर्वाजा ही नही था । महाद्वार को पार कर्के आये थो रास्ता मे बाये तरफ समर्थ सेवा मंडळ का कार्यालय है । उस्के बाजू मे ही श्रीधर कुटी है । सीदा जायेतो स्री रामदास जी का मठ आयीगा । मठ के बाजू मे ही श्री समर्थ रामदास स्वामीजी का समाधि मंदिर है । मठ मे समर्थ रामदास जी का वस्तुसंग्राहालय है । वहॅ समर्थ रामदास जी का बिस्तर, उसका योगदंड, गडका नीछेसे पानी लेकेआनेकेलिए कल्याणस्वामि जी ने उपयोग किया हुआ बृहत गात्र का गेंद और आंजनेय जी से समर्थ रामदास जी को प्रसाद रूप मै मिला हुअ श्रीरामदेव का वल्कल बी है ।
ಗಡದ ಮೇಲೆ ನಿಂತು ಸುತ್ತಲೂ ನೋಡಿದರೆ ಹಲವಾರು ಪರ್ವತಶಿಖರಗಳು ಕಾಣುತ್ತವೆ. ಒಂದು ಬದಿಯಲ್ಲಿ ಊರ್ಮಡಿ ನದಿಗೆ ಅಡ್ಡವಾಗಿ ಕಟ್ಟಿರುವ ಆಣೆಕಟ್ಟು , ಮೊತ್ತೊಂದು ಬದಿಯಲ್ಲಿ ಪರ್ವತಾಗ್ರದಲ್ಲಿ ಅಳವಡಿಸಿದ ಬೃಹತ್ ಪವನವಿದ್ಯುತ್ ಯಂತ್ರಗಳು, ಸುತ್ತಲೂ ಸುಮಾರು ಇಪ್ಪತ್ತು - ಇಪ್ಪತೈದು ಕಿಲೋಮೀಟರ್ ಗಳ ವರೆಗೂ ಕಾಣುವ ಊರುಗಳು, ಸದಾಕಾಲ ಬರ್ರೆಂದು ಬೀಸುವ ಸಿಹಿತಂಗಾಳಿ, ಕೋಟೆಯ ಅವಶೇಷಗಳು, ಅಷ್ಟೆತ್ತರದ ಗಡದ ತುದಿಯಲ್ಲಿ ಇರುವ ನೀರಿನ ಎರಡು ಕೊಳಗಳು, ಚೇತೋಹಾರಿ ಮನೋಜ್ಞ ದೃಶ್ಯಗಳು , ಒಂದೇ ಎರಡೇ. ದಾಸನವಮಿಯ ಸಂದರ್ಭದಲ್ಲಂತೂ ಹೆಸರಿಗೆ ತಕ್ಕಂತೇ ಸಜ್ಜನರಿಂದಲೇ ತುಂಬಿಹೋಗುತ್ತದೆ ಈ ಗಡ. अगर हम गडके ऊपर खडे होकर आजू बाजू मे देके थो, दूर दूर तक पर्वत देखने को मिलेगा । ऐक तरफ तो ऊर्मडी नदी को बनायाहुआ बांध है । दूसरी तरफ पर्वत शिखर मे बृहत पवनविद्युत्यंत्र है । करीब बीस पछ्छीस किलोमीटर तक अलग अलग गाँव दिखायी देथे है । सदाबहार मीठा हल्की हवा, खिला का अवषेश , इतना उंछयी में तीन तालाब, सबी मनोज्न दृश्य देकनेको मिलजायेगा । दासनवमी के समय में सज्जनगड पूरी सज्जनों से ही भर जाथा है । ರಾಜಧಾನಿ ಬೆಂಗಳೂರಿನಿಂದ ಸುಮಾರು ಏಳುನೂರ ಐವತ್ತು ಕಿಲೋಮೀಟರ್, ಎರಡನೆಯ ರಾಜಧಾನಿ ಬೆಳಗಾವಿಯಿಂದ ಸುಮಾರು ಎರಡುನೂರಾ ಐವತ್ತು ಕಿಲೋಮೀಟರ್ ದೂರವಿರುವ ಇದು ಹುಬ್ಬಳ್ಳಿಯಿಂದ ಸುಮಾರು ಮುನ್ನೂರ ನಲವತ್ತು ಕಿಲೋಮೀಟರ್ ದೂರವಿದೆ. ಸತಾರದ ವರೆಗೆ ರೈಲು ಹಾಗೂ ಬಸ್ಸಿನ ಸಂಪರ್ಕವಿದ್ದು , ಅಲ್ಲಿಂದ ಮುಂದಿನ ಹದಿನೆಂಟು ಕಿಲೊಮೀಟರ್ ದೂರವನ್ನು ಬಸ್ಸಿನಲ್ಲಿ ಅಥವಾ ಆಟೋರಿಕ್ಷಾದಲ್ಲಿ ಕ್ರಮಿಸಬಹುದಾಗಿದೆ. ಸತಾರದಿಂದ ಸಜ್ಜನಗಡಕ್ಕೆ ಪ್ರತೀ ತಾಸಿಗೊಂದು ಬಸ್ ಸಂಚರಿಸುತ್ತದೆ. कर्नाटक का रजधानी बेंगलूर से करीबन सात सौ पचास किलोमीटर दूर , दूसरी रजधानी बेलगावी से करीबन दो सौ पचास किलोमीटर दूर , और हुब्बळ्ळी से करीबन तीन सौ चालीस किलोमीटर दूरी पर है ये पुण्यभूमि सज्जनगड । सातार तक रास्ता और रेल का सम्पर्क है । वहां से अट्टारह किलोमीटर दूर को हम आटोरिक्षा से या बस से जा सक्ते हैं । सातारा से सज्जनगड केलिए हर ऐक गंठा को ऐक बस का सेवा है ।
ಗಡದ ಮಧ್ಯದಲ್ಲಿಯವರೆಗೆ ಮಾತ್ರ ವಾಹನಗಳು ಹೋಗುವಂತಹ ರಸ್ತೆ ಇದ್ದು, ನಂತರದ ಸುಮಾರು ಎರಡು ಕಿಲೋಮೀಟರ್ ದೂರವನ್ನು ಮೆಟ್ಟಿಲುಗಳನ್ನು ಹತ್ತಿ ಕ್ರಮಿಸಬೇಕಾಗುತ್ತದೆ. ದೈಹಿಕವಾಗಿ ಅಸಮರ್ಥರಾದವರನ್ನು , ವಯೋವೃದ್ಧರನ್ನು ಗಡದ ಮೇಲೆ ಕರೆದೊಯ್ಯಲು , ನಾಲ್ಕು ಜನರು ಹೊತ್ತೊಯ್ಯುವಂತ ಡೋಲಿ ಅಥವಾ ದಂಡಿಯ ವ್ಯವಸ್ಥೆಯೂ ಇದೆ. ಸ್ವಂತ ವಾಹನ ತೆಗೆದುಕೊಂಡು ಹೋಗುವವರು ಅಲ್ಲಿಯ ವಾಹನ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಹೋಗಬಹುದಾಗಿದೆ. ಜೀವನದಲ್ಲೊಮ್ಮೆ ನೋಡಲೇಬೇಕಾದ ಕ್ಷೇತ್ರ ಇದೆಂದರೂ ತಪ್ಪಾಗಲಾರದು. गडका मध्य तक ही वाहन जानेकेलिऐ रास्ता है । आगे का करीबन दो किलोमीटर का दूरी हम्को पैधल ही जाना पड्ता है । दैहिक रूप में असमर्थ लोगोंकेलिए और वृद्द लोगोंको ऊपर लेनेकेलिऐ दंडी या डोली का बिआना व्यवस्था बी है । दंडी या डोलि का मतलब चार आदमी ऐक पालकी का तरह का व्यवस्था में ऐक असमर्थ आदमीको बिठाकर ऊपर लेके जानेका व्यवस्था है । खुद का वाहन लेके जानेवाला लोग वहां का वाहन निल्दाण में वाहन को छोढ्कर ऊपर जासक्ते है । हर आदमी उसका जीवन काल में कम से कम ऐक बार जरूर देखने का जगह है ये सज्जनगड पुण्यभूमि ।
- ಗುರುಪ್ರಸಾದ ಕಾನಲೆ - गुरुप्रसद कानले

World Photography Day

ಇವತ್ತು ವಿಶ್ವ ಛಾಯಾಗ್ರಾಹಕರ ದಿನ.  ಒಂದಷ್ಟು ಒಳ್ಳೆಯ ಚಿತ್ರಗಳನ್ನು ನಿಮಗೆ ನೀಡದೆ ಇದ್ದರೆ ನನಗೆ ಸಮಾಧಾನ ಆಗಲಾರದು. ನೋಡಿ , ಆನಂದಿಸಿ .
ಆದರೆ ಇಂದು ನಾವು ನಮ್ಮ ಪುರಾತನ ಪೀಳಿಗೆಯ ಜನರಿಂದ ಬಳುವಳಿಯಾಗಿ ಬಂದ ಸುಂದರ ಪ್ರಕ್ರತಿಯನ್ನ ನೋಡಿ ಆನಂದ ಪಡುತ್ತಿದ್ದೇವೆ , ಇದನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮದು ಎಂಬ ಅರಿವು ಎಲ್ಲರಿಗು ಇರಲಿ .



ಇದು ಸಜ್ಜನ ಗಡ ದಲ್ಲಿ ತೆಗೆದ ಚಿತ್ರ 

ಇದು ಕೂಡಾ ಸಜ್ಜನ ಗಡ ದಲ್ಲೇ ತೆಗೆದ ಚಿತ್ರ 



ಅಸ್ಸಾಂ ನಿಂದ ವಾಪಸ್ ರೈಲಿನಲ್ಲಿ ಬರುವಾಗ ತೆಗೆದ ಚಿತ್ರ  
ಅಸ್ಸಾಂ ನ ಸುಂದರ ಟೀ ತೋಟ 


ಹೆಬ್ಬಾರ್ ಗುಡ್ಡ ದ ಹಾದಿಯಲ್ಲಿ 

ಆಗುಂಬೆ ಘಟ್ಟದ ನಡುವೆ 

ನಿರ್ಮಾನುಷ್ಯ ಹಾದಿಯಲ್ಲಿ