Saturday, September 10, 2016

ಶ್ರೀ ಆಧ್ಯಾತ್ಮ ರಾಮಾಯಣ

ಶ್ರೀ ಆಧ್ಯಾತ್ಮ ರಾಮಾಯಣ : ಪುಸ್ತಕ ಪರಿಚಯ





ಶ್ರೀ ಆಧ್ಯಾತ್ಮ ರಾಮಾಯಣವು ತ್ರೇತಾಯುಗದಲ್ಲಿಯೇ ಶ್ರೀ ವಾಲ್ಮೀಕಿ ಮುನಿವರ್ಯರಿಂದ ಬರೆಯಲ್ಪಟ್ಟಿದೆ.


"ವಾಲ್ಮೀಕಿ ರಾಮಾಯಣ"ವು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದ್ದು , ಗ್ರಂಥರೂಪದಲ್ಲಿ ಸಂಸ್ಕೃತ ಭಾಷೆಯಲ್ಲಿದೆ.

ವಿಸ್ತ್ರತವಾಗಿರುವ ಜೊತೆಗೆ ಅದರ ಸಂಸ್ಕೃತ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿರುವುದರಿಂದ ಅದರ ಅಂತರಾರ್ಥ ತಿಳಿಯುವುದು ಕಷ್ಟ ಎಂಬ ಭಾವನೆಯಿಂದ ಈ ಆಧ್ಯಾತ್ಮ ರಾಮಾಯಣವನ್ನು ಬರೆದರು ಎಂಬ ನಂಬಿಕೆಯಿದೆ.








ಈ " ಆಧ್ಯಾತ್ಮ ರಾಮಾಯಣ " ಗ್ರಂಥವನ್ನು ಕಾನಲೆಗ್ರಾಮದ ( ಸಾಗರ ತಾಲ್ಲೂಕು-ಶಿವಮೊಗ್ಗ ಜಿಲ್ಲೆ) ಶ್ರೀಯುತ ಪುಟ್ಟಪ್ಪ ಯಾನೆ ತಿರುಮಲಯ್ಯನವರು, ಜೀರ್ಣರೂಪದಲ್ಲಿದ್ದ ಮೂಲ ಸಂಸ್ಕೃತ ಗ್ರಂಥವನ್ನು ಸಂರಕ್ಷಿಸಿ, ನಂತರ ವಿದ್ವಜ್ಜನರ ಹಾಗೂ ತಮ್ಮ ಜ್ಞಾನಸಂಪತ್ತನ್ನು ವೃದ್ಧಿ ಮಾಡಿಕೊಳ್ಳಲೋಸ್ಕರ, ವೇ.ಬ್ರ.ಶ್ರೀ ಪಟ್ಟಾಭಿರಾಮ ಶಾಸ್ತ್ರಿಗಳು ಹಾಗೂ ವೇ.ಬ್ರ.ಶ್ರೀ ದಕ್ಷಿಣಾಮೂರ್ತಿ ಗಳಿಂದ ಕನ್ನಡ ಭಾಷೆಗೆ ಅನುವಾದ ಮಾಡಿಸಿ ನಂತರ ಪ್ರಕಟ ಮಾಡಿಸಿದ್ದರು. ಹಿರಿಯ ವಿದ್ವಾಂಸರೂ ಸಂಸ್ಕೃತ - ಹಿಂದಿ - ಕನ್ನಡ ಪಂಡಿತರಾದ ಶ್ರೀಯುತ ನಿ.ನಾ.ಮಧ್ಯಸ್ಥರು, ಇದನ್ನು ಪರಿಶೀಲಿಸಿ ನಿರ್ದೇಶಿಸಿದ್ದಾರೆ.


ಶ್ರೀಯುತ. ಕೆ.ವಿ.ಮಂಜುನಾಥ್ ಕುಂಟಗೋಡು ಹಾಗೂ ಕುಮಾರೀ ಶೈಲಾ.ಎನ್ ಇವರು ಅಕ್ಷರ ವಿನ್ಯಾಸದ ಕಾರ್ಯ ನಿರ್ವಹಣೆ ಹೊತ್ತುಕೊಂಡಿದ್ದರು. ಸಾಗರದ ವಿಜ್ಞಾನ್ ಕಂಪ್ಯೂಟರ್ಸ್ ಮತ್ತು ಡಿ.ಟಿ.ಪಿ.ಕೇಂದ್ರದವರು ಅಕ್ಷರ ಜೋಡಣೆ ಮಾಡಿದ್ದಾರೆ. ಗ್ರಂಥಕ್ಕೆ ಮುಖಚಿತ್ರವನ್ನು ಸಾಗರದ ಕಲ್ಯಾಣಿ ಗ್ರಾಫಿಕ್ಸ್ ನವರು ಸುಂದರವಾಗಿ ಮಾಡಿಕೊಟ್ಟಿದ್ದಾರೆ.








ಒಮ್ಮೆ ಉಪಾಹಾರ ಗೃಹಕ್ಕೆ ಸಂಸಾರ ಸಮೇತವಾಗಿ ಭೇಟಿ ನೀಡಿದರೆ ಐದುನೂರು ರೂಪಾಯಿಗಳು ಗೊತ್ತಾಗದಂತೆ ಖರ್ಚಾಗುವ ಈ ಕಾಲದಲ್ಲಿ, ಪ್ರತೀ ಮನೆಯಲ್ಲಿಯು ಇರಲೇಬೇಕಾದ, ನಮ್ಮ ನಂತರದ ಪೀಳಿಗೆಗೆ ಅವಶ್ಯ ಪರಿಚಯ ಇರಲೇ ಬೇಕಾದ ಈ ಹೊತ್ತಿಗೆಯ ಬೆಲೆ ಎರಡು ನೂರು ರೂಪಾಯಿಗಳು.

ಕನ್ನಡದ ಓದುಗರು , ಜಿಜ್ಞಾಸುಗಳು, ಚಿಂತಕರು, ಸಾಹಿತ್ಯಾಸಕ್ತರು, ಆದ್ಯಾತ್ಮ ಸಾಧಕರು, ಜನಸಾಮಾನ್ಯರು ಹೊಂದಿರಲೇಬೇಕಾದ ಈ ಪುಸ್ತಕವನ್ನು ಹೊಂದಲೂ ಯೋಗಬೇಕು ಎಂಬುದು ನನ್ನ ಅಭಿಮತ. ಆಸಕ್ತರು ಪ್ರತಿಗಳಿಗಾಗಿ, ದಿವಂಗತ ಶ್ರೀ ಪುಟ್ಟಪ್ಪ ನವರ ಮೊಮ್ಮಗ , ದಿವಂಗತ ಶ್ರೀ ಲಕ್ಷ್ಮೀನಾರಾಯಣ ರವರ ಮಗ ಶ್ರೀ ಗುರುಪ್ರಸಾದ್ ಇವರಲ್ಲಿ ವಿಚಾರಿಸಬಹುದು.





ನಾನು ಕೇವಲ ಒಳ್ಳೆಯ ಗ್ರಂಥಗಳನ್ನು, ನಿಯತಕಾಲಿಕಗಳನ್ನು ಮಾತ್ರ ನನ್ನ ಸ್ನೇಹಿತರಿಗೆ ಪರಿಚಯಿಸುತ್ತೇನೆ. ಇದು ನಿಮಗೂ ತಿಳಿದಿರಬಹುದು. ಸದ್ಗುರು ಶ್ರೀಧರ ಸ್ವಾಮಿಗಳ ಮೂಲಚರಿತ್ರೆ ನನಗೆ ಪುಣ್ಯಫಲದಿಂದ ದೊರಕಿದ ಬಗ್ಗೆ ಒಮ್ಮೆ ತಿಳಿಸಿದ್ದೇನೆ. ಈಗ ಎಷ್ಟೇ ದುಡ್ಡು ಕೊಡುತ್ತೇನೆಂದರೂ ಅದು ಸಿಗಲಾರದು.. ಅಂತೆಯೇ ಈ ಮಹಾಗ್ರಂಥವೂ ಕೂಡಾ ಸಿಗುವುದು ದುರ್ಲಭವೇ ಆಗಿದೆ. ಅದರಲ್ಲೂ ಹಿಂದೂ ಧರ್ಮದ ಮೇಲೆ , ರಾಮಾಯಣದ ಮೇಲೆ , ತೀವ್ರ ತರನಾದ ದಾಳಿ ನಡೆಯುತ್ತಿರುವ ಈ ಸಂಧರ್ಭದಲ್ಲಿ ನಮ್ಮ ಪೀಳಿಗೆಗೆ ರಾಮಾಯಣದ ಮಹತ್ವವನ್ನು ಪರಿಚಯ ಮಾಡಿಕೊಡಲೇ ಬೇಕಾದ ಅನಿವಾರ್ಯತೆ ಇದೆ. ಬೇರಾರೋ ಈ ದಾಳಿ ಮಾಡಿದರೆ ಸಹಜ ಎನ್ನಬಹುದು, ಆದರೆ ನಮ್ಮವರೇ, ಅರೆಬರೆ ಜ್ಞಾನದಲ್ಲಿ, ಪೂರ್ಣ ಪರಿಚಯ ಇಲ್ಲದೇ , ದುರುದ್ದೇಶಪೂರ್ವಕವಾಗಿ , ದಾಳಿ ಮಾಡುತ್ತಿರುವುದು ಅತ್ಯಂತ ಖೇದಕರ.










ಕೆಲವೇ ಕೆಲವು ಪ್ರತಿಗಳು ಈಗ ಲಭ್ಯವಿದೆ.


ಆಸಕ್ತರು ಶ್ರೀ Guru Hegde Sagar
( 99002 33300 )
(https://www.facebook.com/guru.sagar.50 ) ಅವರನ್ನು ವಿಚಾರಿಸಬಹುದು,
ಅಥವಾ
ನನ್ನ ನಂಬರ್ 81476 88898
ಸಂಪರ್ಕಿಸಬಹುದು .

No comments:

Post a Comment